Monthly Archives: December 2011

ವಾಸಿ ಮತ್ತು ವೇಶಿಯೋಗಗಳು – ಭಾಗ ೨

ಕಳೆದ ಲೇಖನದಲ್ಲಿ ವಾಸಿಯೋಗವನ್ನು ತಿಳಿದದ್ದಾಯಿತು. ರವಿಯ ಸ್ಥಿತಿಯಿಂದ ನೋಡಲ್ಪಡುವ ಈ ಯೋಗಗಳು ಇವತ್ತು ಅಷ್ಟು ಪ್ರಚಾರವನ್ನು ಪಡೆದಿಲ್ಲವೆಂಬುದು ನಿಜ, ಆದರೆ ಈ ಯೋಗಗಳು ಮಾರ್ಗದರ್ಶಕವಾಗಿವೆ. ರವಿಯಿಂದ ಹನ್ನೆರಡನೆಯ ಮನೆಯಿಂದ ವಾಸಿಯೋಗವು ಎರ್ಪಡುವಂತೆ ಎರಡನೇಯ ಮನೆಯಲ್ಲಿ ಪ್ರಸಕ್ತ ವೇಶಿಯೋಗವನ್ನು ನೋಡಬೇಕು. ರವಿಯಿಂದ ಎರಡನೇಯ ಮನೆಯಲ್ಲಿ ಚಂದ್ರನಲ್ಲದೆ ಬೇರೆ ಯಾವುದೇ ಗ್ರಹ ಅಥವಾ ಗ್ರಹಗಳಿದ್ದರೆ ವೇಶಿಯೋಗ ಉಂಟಾಗುತ್ತದೆ. ಈ … Continue reading

Posted in ಗ್ರಹಯೋಗಗಳು, ಜ್ಯೋತಿಷ | Tagged , , , , , , | Leave a comment

ದ್ವಾದಶ ಭಾವ ವಿಚಾರ

ಈ ಮಾಲಿಕೆಯ ಹಿಂದಿನ ಲೇಖನದಲ್ಲಿ ದ್ವಾದಶ ಭಾವಗಳ ಸಂಜ್ಞೆ ಮತ್ತು ಕೇಂದ್ರಾದಿ ಭಾವಗಳ ಪರಿಚಯಮಾಡಿಕೊಂಡದ್ದಾಯಿತು. ಈ ಲೇಖನದಲ್ಲಿ ಈ ಹನ್ನೆರಡು ಭಾವಗಳಿಂದ ಯಾವ ಯಾವ ವಿಚಾರಗಳನ್ನು ಮಾಡಬೇಕು ಎಂಬುವುದನ್ನು ನೋಡೋಣ. ಪ್ರಾಯಶಃ ಎಲ್ಲ ಜ್ಯೋತಿಷ್ಯ ಗ್ರಂಥಗಳಲ್ಲಿ ಈ ಬೆಗ್ಗೆ ಅನೇಕ ವಿಚಾರಗಳನ್ನು ಹೇಳಲಾಗಿದೆ. ಈ ಲೇಖನಕ್ಕಾಗಿ ನಾನು ಪರಾಶರ ಹೋರಾ ಮತವನ್ನು ಅನುಸರಿಸಿದ್ದೇನೆ. (ಇದು ಪ್ರಾಚೀನ … Continue reading

Posted in ಜ್ಯೋತಿಷ, ಹೋರಾ ಶಾಸ್ತ್ರ | Tagged , , , | Leave a comment

ವಾಸಿ ಮತ್ತು ವೇಶಿಯೋಗಗಳು – ಭಾಗ ೧

ನಾವು ಜ್ಯೋತಿಷಿಗಳ ಹತ್ತಿರ ಹೋದಾಗ ರಾಜಯೋಗ, ವಿಪರೀತ ರಾಜಯೋಗ, ಮೃತ್ಯುಯೋಗ, ಷಡಷ್ಟಕ ಯೋಗ, ಕಾಳಸರ್ಪ ಯೋಗ ಇತ್ಯಾದಿ ಅನೇಕ ಭಯಜನಕ ಯೋಗನಾಮಗಳನ್ನು ಕೇಳುತ್ತೇವೆ. ಆದರೆ ಈ ಭಯ ಹುಟ್ಟಿಸುವ ಯೋಗಗಳ ಗುರಿ ಭಯಜನಕ ಯೋಗಗಳಾಗಿ ಮಾತ್ರ, ಜೀವಮಾನದ ಕೇವಲ ಕೆಲವು ಸಂದರ್ಭ ಅಥವಾ ಕಾಲಖಂಡಗಳಲ್ಲಿ ಅವುಗಳು ಅನುಭವಕ್ಕೆ ಬರುತ್ತವೆ. ಇದರರ್ಥ ಇವು ನಿರರ್ಥಕ ಅಥವಾ ಉಪೇಕ್ಷಣೀಯವೆಂದು … Continue reading

Posted in ಗ್ರಹಯೋಗಗಳು, ಜ್ಯೋತಿಷ | Tagged , , , , , , | Leave a comment

ಲಗ್ನಾದಿ ದ್ವಾದಶ ಭಾವಗಳು-ಸ್ಥಾನಗಳು

ಜಾತಕ ಅಥವಾ ಕುಂಡಲಿಗಳಲ್ಲಿ ಹನ್ನೆರಡು ಮನೆಗಳಿರುತ್ತವೆ, ಅವುಗಳನ್ನು ಭಾವ ಅಥವಾ ಸ್ಥಾನಗಳೆಂದು ಕರೆಯಲಾಗುತ್ತದೆ. ಈ ಹನ್ನೆರಡು ಭಾವಗಳು ಮನುಷ್ಯನ ಜೀವನದ ವಿವಿಧ ವಿಷಯಗಳ ಸೂಚಕಗಳಾಗಿವೆ. ದ್ವಾದಶ ಭಾವಗಳ ಸೂಕ್ಷ್ಮ ಪರಿಚಯವು ಜ್ಯೋತಿಷ್ಯ ಮತ್ತು ಫಲನಿರ್ದೇಶಕ್ಕೆ ಅತ್ಯಂತ ಅವಶ್ಯಕ. ಈ ಲೇಖನದಲ್ಲಿ ಇವುಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳೋಣ. ನಮ್ಮ ದೇಶದಲ್ಲಿ ಜಾತಕವನ್ನು ಬರೆಯುವ ಅನೇಕ ಪ್ರಕಾರಗಳಿವೆ. ಮುಖ್ಯವಾಗಿ … Continue reading

Posted in ಜ್ಯೋತಿಷ, ಹೋರಾ ಶಾಸ್ತ್ರ | Tagged , , , , , , , , , | Leave a comment

ಶ್ರೀನವಗ್ರಹ ಪೀಡಾಪರಿಹಾರಕಸ್ತೋತ್ರಮ್ (ಬ್ರಹ್ಮಾಂಡ ಪುರಾಣಾಂತರ್ಗತ)

ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ | ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ರವಿಃ || ೧ || ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ | ವಿಷಮಸ್ಥಾನ ಸಂಭೂತಾಂ ಪೀಡಾಂ ಹರತು ಮೇ ವಿಧುಃ || ೨ || ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ಸದಾ | ವೃಷ್ಟಿಕೃತ್-ದೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ || ೩ || … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , | Leave a comment

ಚಂದ್ರ ಗ್ರಹಣ – ದಾನ, ಪಾರಾಯಣ, ಪರಿಹಾರ

ಡಿಸೆಂಬರ್ 10ರ ಚಂದ್ರಗ್ರಹಣವು ರೋಹಿಣಿ ಮತ್ತು ಮೃಗಶಿರಾ ನಕ್ಷತ್ರಗಳಲ್ಲಿ (ವೃಷಭ ರಾಶಿ) ನಡೆಯಲಿದೆ. (ಈ ಕುರಿತು ಹಿಂದಿನ ಲೇಖನವನ್ನು ನೋಡಿ) ಆದ್ದರಿಂದ ತ್ರಿಜನ್ಮ ನಕ್ಷತ್ರಜಾತರಾದ ರೋಹಿಣಿ, ಮೃಗಶಿರಾ ಮತ್ತು ಆರ್ದ್ರಾ – ಈ ನಕ್ಷತ್ರ ಮತ್ತು ರಾಶಿಯವರು ದಾನಗಳನ್ನು ಮಡಬೇಕು. ಚಂದ್ರಗ್ರಹಣಕ್ಕೆ ವಿಶೇಷವಾಗಿ ಚಂದ್ರಬಿಂಬ ಮತ್ತು ನಾಗ ಪ್ರತಿಮೆಯ ದಾನವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸುವರ್ಣ ಅಥವಾ … Continue reading

Posted in ಗ್ರಹಣ, ಜ್ಯೋತಿಷ, ಶಾಂತಿ-ಪರಿಹಾರೋಪಾಯ | Tagged , , , , , , , , , , , | Leave a comment

ಕೇತುಗ್ರಸ್ತ ಚಂದ್ರಗ್ರಹಣ – ಡಿಸೆಂಬರ್ 10, 2011

ಸೂರ್ಯ ಮತ್ತು ಭೂಮಿಯನ್ನು ಸುತ್ತುತ್ತಿರುವ ಚಂದ್ರನ ನಡುವೆ ಭೂಮಿಯು ಬಂದು ಅದರ ನೆರಳು ಚಂದ್ರಬಿಂಬವನ್ನು ಮರೆಮಾಡುವ ಅವಕಾಶೀಯ ವಿದ್ಯಮಾನವೇ ಚಂದ್ರಗ್ರಹಣ. ಇಂಥಹ ವಿದ್ಯಮಾನ ಇದೇ ಡಿಸೆಂಬರ್ 10ರಂದು ಘಟಿಸಲಿದ್ದು ಭಾರತದಾದ್ಯಂತ ಪೂರ್ಣವಾಗಿ ಗೋಚರಿಸಲಿದೆ. ಭೂಚ್ಛಾಯಾಂ ಸ್ವಗ್ರಹಣೇ ಭಾಸ್ಕರಂ ಅರ್ಕಗ್ರಹಣೇ ಪ್ರವಿಶತಿ ಇಂದುಃ | (ಬೃಹತ್ಸಂಹಿತಾ) “ಚಂದ್ರನು ತನ್ನ ಗ್ರಹಣದಲ್ಲಿ ಭೂಛಾಯೆಯನ್ನು ಅಂತೆಯೇ ಸೂರ್ಯಗ್ರಹಣದಲ್ಲಿ ಸೂರ್ಯಬಿಂಬವನ್ನು ಪ್ರವೇಶಿಸುತ್ತಾನೆ”. … Continue reading

Posted in ಗ್ರಹಣ, ಜ್ಯೋತಿಷ | Tagged , , , , , , , , | 1 Comment