Monthly Archives: January 2012

ಶ್ರೀಸೂರ್ಯಮಂಡಲಸ್ತೋತ್ರಮ್ (ಸೂರ್ಯಮಂಡಲಾಷ್ಟಕಮ್)

ಶ್ರೀಸೂರ್ಯಮಂಡಲಸ್ತೋತ್ರಮ್ (ಸೂರ್ಯಮಂಡಲಾಷ್ಟಕಮ್) ನಮಃ ಸವಿತ್ರೇ ಜಗದೇಕಚಕ್ಷುಷೇ ಜಗತ್ಪ್ರಸೂತೀ ಸ್ಥಿತಿ ನಾಶ ಹೇತವೇ | ತ್ರಯೀಮಯಾಯ ತ್ರಿಗುಣಾತ್ಮ ಧಾರಿಣೇ ವಿರಂಚಿ ನಾರಾಯಣ ಶಂಕರಾತ್ಮನೇ || ೧ || ಯನ್ಮಂಡಲಂ ದೀಪ್ತಿಕರಂ ವಿಶಾಲಂ ರತ್ನಪ್ರಭಂ ತೀವ್ರಮನಾದಿ ರೂಪಮ್ | ದಾರಿದ್ರ್ಯ ದುಃಖ ಕ್ಷಯಕಾರಣಂ ಚ ಪುನಾತು ಮಾಂ ತತ್ಸವಿತುರ್ವರೇಣ್ಯಮ್ || ೨ || ಯನ್ಮಂಡಲಂ ದೇವ ಗಣೈಃ ಸುಪೂಜಿತಂ … Continue reading

Posted in ಜ್ಯೋತಿಷ, ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , | Leave a comment

ಸೂರ್ಯಾಷ್ಟಕಮ್

ಸಾಂಬ ಉವಾಚ – ಆದಿದೇವಂ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ | ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತುತೆ || ೧ || ಸಪ್ತಾಶ್ವರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ | ಶ್ವೇತಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೨ || ಲೋಹಿತಂ ರಥಮಾರೂಢಂ ಸರ್ವಲೋಕಪಿತಾಮಹಂ | ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ || ೩ || … Continue reading

Posted in ಜ್ಯೋತಿಷ, ನವಗ್ರಹಗಳು, ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , | Leave a comment

ರಥ ಸಪ್ತಮೀ

ಅರ್ಕ ಸಪ್ತಮೀ, ಭಾನು ಸಪ್ತಮೀ, ಅಚಲಾ ಸಪ್ತಮೀ, ಸೂರ್ಯ ಸಪ್ತಮೀ ಹೀಗೆ ಭಾರತದಾದ್ಯಂತ ಪ್ರಸಿದ್ಧವಾಗಿರುವ ಸೂರ್ಯನ ಜನ್ಮೋತ್ಸವವೇ ರಥ ಸಪ್ತಮೀ. ಸೋಮವಾರ ೩೦/೧/೨೦೧೨ ರಂದು ಈ ಶ್ರೇಷ್ಠದಿವಸವಿದೆ. ಈ ದಿನದಿಂದಲೇ ಸೂರ್ಯನು ಸಮಸ್ತ ಪ್ರಪಂಚಕ್ಕೆ ಬೆಳಕನ್ನು ಕೊಡಲು ಪ್ರಾರಂಭಿಸಿದನು. ಈ ದಿನವೇ ಅವನು ರಥಾರೂಢನಾಗುತ್ತಾನೆ. ಸಂವತ್ಸರವೆಂಬ ಹೆಸರಿನ ತನ್ನ ಒಂದೇ ಚಕ್ರವುಳ್ಳ ವಿಚಿತ್ರ ರಥದಲ್ಲಿ ಆರೂಢನಾಗಿ … Continue reading

Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು, ಪಂಚಾಂಗ, ಹಬ್ಬ-ಪರ್ವಗಳು | Tagged , , , , , , , , | Leave a comment

ಸೂರ್ಯನಾರಾಯಣ – ಭಾಗ ೨ – ಪುರಾಣಗಳಲ್ಲಿ ಸೂರ್ಯಕಥೆ

ಆದಿತ್ಯ ಸೂರ್ಯನ ಉತ್ಪತ್ತಿಯ ಕುರಿತು ಪುರಾಣಗಳಲ್ಲಿ ಅನೇಕ ವಿಧ ವಿವರಗಳು ಲಭ್ಯ. ಪ್ರಸಕ್ತ ಲೇಖನದಲ್ಲಿ ಮಾರ್ಕಂಡೇಯ ಪುರಾಣಾಂತರ್ಗತ ಕಥಾವಸ್ತುವನ್ನು ಸಂಗ್ರಹಿಸುತ್ತಿದ್ದೇನೆ. ಕಶ್ಯಪ ಅದಿತಿಯರ ಪುತ್ರನಾಗಿ ಸೂರ್ಯನ ಜನ್ಮ, ಸಂಜ್ಞೆ ಮತ್ತು ಛಾಯಾದೇವಿಯರೆಂಬ ಸೂರ್ಯಪತ್ನಿಯರ ವಿವರಗಳು ಇಲ್ಲಿ ಬಂದಿವೆ. Continue reading

Posted in ಜ್ಯೋತಿಷ, ನವಗ್ರಹ ಪರಿಚಯ, ನವಗ್ರಹಗಳು | Tagged , , , , , , , , , | 1 Comment

ಉಭಯಚರಿ ಯೋಗ

ವಾಸಿ ಮತ್ತು ವೇಶಿಯೋಗಗಳ ಸಾಲಿನಲ್ಲಿ ಸೇರುವ ಸೂರ್ಯನಿಂದ ನೋಡಲ್ಪಡುವ ಈ ಯೋಗವು ರಾಜಯೋಗವೆಂದೇ ಜ್ಯೋತಿಷ್ಯ ಗ್ರಂಥಗಳಲ್ಲಿ ಪರಿಗಣಿಸಲ್ಪಟ್ಟಿದೆ. ಇಂದಿನ ಕಾಲದಲ್ಲಿ ರಾಜಾದಿಗಳು ಇಲ್ಲವಾದರು ಮಹಾಜನರೆಂದು, ಪ್ರಭಾವೀ ವ್ಯಕ್ತಿಗಳೆಂದು ಕರೆಯಲ್ಪಡುವ ಅತ್ಯಂತ ಯಶಸ್ವಿ ವ್ಯಕ್ತಿಗಳ ಜಾತಕದಲ್ಲಿ ಈ ಯೋಗವು ಸ್ಪಷ್ಟವಾಗಿ ಕಾಣಸಿಗುತ್ತದೆ. ಈ ವ್ಯಕ್ತಿಗಳು ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ, ಇವರು ಜನಸಾಮಾನ್ಯರಿಗೆ ಆದರ್ಶಪ್ರಾಯರಾಗಿರುತ್ತಾರೆ. … Continue reading

Posted in ಗ್ರಹಯೋಗಗಳು, ಜ್ಯೋತಿಷ | Tagged , , , , | 1 Comment

ಋಣಮೋಚಕ ಮಂಗಲ ಸ್ತೋತ್ರಮ್

ಅಂಗಾರಕ, ಕುಜ ಎಂದು ಪ್ರಸಿದ್ಧನಾದ ಮಂಗಳನು ಶಾಸ್ತ್ರಗಳಲ್ಲಿ ಋಣಬಾಧಾ ನಿವಾರಕನೆಂದು ಪ್ರಸಿದ್ಧನಾಗಿದ್ದಾನೆ (ಋಣಹರ್ತಾ ಧನಪ್ರದಃ). ಭಕ್ತಿ ಮತ್ತು ವಿಶ್ವಾಸದಿಂದ ಮಂಗಳನ ಸ್ತೋತ್ರಮಾಡುವುದರಿಂದ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗಿ ಸಾಲಬಾಧೆಗಳಿಂದ ಅವಶ್ಯ ಮುಕ್ತಿದೊರೆಯುವುದು. ಮೇಷರಾಶಿ ಅಥವಾ ಲಗ್ನ, ವೃಶ್ಚಿಕರಾಶಿ ಅಥವಾ ಲಗ್ನವಿರುವವರು, ಜಾತಕದಲ್ಲಿ ಕುಜನು ನೀಚ, ಅಸ್ತ, ದುಃಸ್ತಾನಗಳಲ್ಲಿದ್ದವರು ಈ ಸ್ತೋತ್ರದಿಂದ ಅವಶ್ಯ ಲಾಭ ಪಡೆಯಬಹುದು. ಸುಮುಹೂರ್ತದಲ್ಲಿ (ಒಳ್ಳೆಯ … Continue reading

Posted in ಶಾಂತಿ-ಪರಿಹಾರೋಪಾಯ, ಸ್ತುತಿ-ಸ್ತೋತ್ರ | Tagged , , , , , , , , , | Leave a comment

ಸೂರ್ಯನಾರಾಯಣ – ಭಾಗ ೧

ಸೂರ್ಯನು ಪ್ರತ್ಯಕ್ಷ ದೈವ. ಪ್ರಧಾನ ವೈದಿಕ ದೇವತೆಗಲ್ಲಿ ಒಬ್ಬ. ನಮ್ಮ ಸನಾತನ ಪರಂಪರೆಯಲ್ಲಿ ಸೂರ್ಯನಿಗೆ ಇರುವ ಸ್ಥಾನ ಶ್ರೇಷ್ಠವಾದದ್ದು. ಅನಾದಿ ಕಾಲದಿಂದ ವೈದಿಕರು ಈ ಸೂರ್ಯಾಂತರ್ಗತನಾದ ಗಾಯತ್ರೀ ಪ್ರತಿಪಾದ್ಯ ಪರಬ್ರಹ್ಮನ ಆರಾಧನೆಯನ್ನೇ ಮಾಡುತ್ತಿದ್ದಾರೆ. ವೇದ, ಆಗಮ, ಪುರಾಣ, ಇತಿಹಾಸ, ಸ್ಮೃತಿಗಳಲ್ಲಿ ಸೂರ್ಯನ ಕುರಿತು ಅನೇಕ ಮಹಿಮೆಗಳನ್ನು ಹೇಳಲಾಗಿದೆ. ನಮ್ಮ ದೇಶದಲ್ಲಿ ಪ್ರಾಚೀನಕಾಲದಿಂದ ನಡೆದು ಬಂದಿರುವ ಪಂಚದೇವತಾ … Continue reading

Posted in ಜ್ಯೋತಿಷ, ನವಗ್ರಹಗಳು | Tagged , , , , , | Leave a comment

ಹೊಸ ವರ್ಷ ೨೦೧೨ರ ಹಾರ್ದಿಕ ಶುಭಾಶಯಗಳು

ಫಲಜ್ಯೋತಿಷ್ಯದ ಎಲ್ಲ ವಾಚಕವೃಂದಕ್ಕೆ ಹೊಸ ವರ್ಷ ೨೦೧೨ರ ಹಾರ್ದಿಕ ಶುಭಾಶಯಗಳು. ಈ ವರ್ಷ ಸಮಸ್ತರಿಗೂ ಕಲ್ಯಾಣಪ್ರದ, ಶಾಂತಿಪ್ರದವೂ ಆಗಲಿ ಎಂದು ಶ್ರಿಹರಿವಾಯುಗುರುಗಳಲ್ಲಿ ಭಕ್ತಿಪೂರ್ವಕವಾಗಿ ಬೇಡಿಕೊಳ್ಳೋಣ. ಧರ್ಮದ ಅಭಿವೃದ್ಧಿಯಾಗಲಿ, ಅಧರ್ಮ-ಅನಾಚಾರಗಳು ತೊಲಗಲಿ ಎಂದು ಪರಮಪುರುಷ ಶ್ರೀಹರಿಯಲ್ಲಿ ಪ್ರಾರ್ಥಿಸೋಣ. ಅತಿಯಾದ ಆಧುನಿಕತೆಯ ಭರದಲ್ಲಿ ನಮ್ಮ ಸಂಸ್ಕೃತಿ-ಪರಂಪರೆಯನ್ನು ತಿರಸ್ಕರಿಸಿ ಅಧೋಗತಿಯತ್ತ ಸಾಗುತ್ತಿರುವ ನಮ್ಮ ಇಂದಿನ ಸಮಾಜ ಇನ್ನಾದರು ಎಚ್ಚೆತ್ತು ನಮ್ಮ … Continue reading

Posted in ಪ್ರಕಟಣೆ | Leave a comment